ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು
1. ಸುಶ್ರುತ
ವೈದಿಕಯಷಿ ವಿಶ್ವಾಮಿತ್ರನ ವಂಶಸ್ಸಕ್ರಿ.ಪೂ. 600 ವರ್ಷಕ್ಕಿಂತ ಪೂರ್ವದಲ್ಲಿ ಜನಿಸಿದ್ದರು. ಅವರು ಪ್ರಾಚೀನ ಭಾರತದ ಒಬ್ಬ ಪ್ರಸಿದ್ದ ಶಲ್ಯ ಚಿಕಿತ್ಸಕರಿದ್ದು, ಅವರು ವೈದ್ಯರ ಹಾಗೂ ಶಲ್ಯ ಚಿಕಿತ್ಸೆಯ ಜ್ಞಾನವನ್ನು ವಾರಣಾಸಿಯ ದಿವೋದಾಸ ಧನ್ವಂತರಿಯ ಆಶ್ರಮದಿಂದ ಪಡೆದರು.
ಸುಶ್ರುತರು ಶಲ್ಯ ಚಿಕಿತ್ಸೆಯೊಂದಿಗೆ ವೈದ್ಯಕೀಯ ಆನೇಕ ರಂಗಗಳಲ್ಲಿ ಪಾರಂಗತರಿದ್ದರು. ವಿಶ್ವದ ಚಿಕಿತ್ಸಾ ಇತಿಹಾಸದಲ್ಲಿ ಸುತ್ತುತರಿಗೆ ಶಲ್ಯ ಚಿಕಿತ್ಸೆಯ ಜನಕರೆಂದು ಮನ್ನಿಸಲಾಗುತ್ತದೆ. ಶಲ್ಯದ ಅರ್ಥ ಶರೀರದ ಪೀಡೆ ಹಾಗೂ ಆ ಪೀಡೆಯನ್ನು ಉಪಕರಣಗಳ ಪ್ರಯೋಗದಿಂದ ದೂರ ಮಾಡುವ ಕ್ರಿಯೆಗೆ ಶಲ್ಯ ಚಿಕಿತ್ಸಾ ಅಥವಾ ಸರ್ಜರಿ ಎಂದು ಹೆಸರಿಡಲಾಗಿದೆ.
ಸುತ್ತುತರು ಮೊದಲಿಗೆ ಚಿಕಿತ್ಸಕರು, ಅವರು ಚಿಕಿತ್ಸಾದ ಪ್ರಚಾರ ಮಾಡಿದರು, ಅವರು ಶಲ್ಯ ಚಿಕಿತ್ಸಕರನ್ನು ಅವರೇಶನದ ಪೂರ್ವ ಉಪಕರಣಗಳನ್ನು ಬೆಂಕಿಯಲ್ಲಿ ಕಾಸುವ ಸಲಹೆ ನೀಡಿದರು. ಅದರಿಂದಾಗಿ ಕೀಟಾಣುಗಳು ಸತ್ತು ಹೋಗುವವು, ಅವರ ಸಲಹೆ ಯಿಂದ ರೋಗಿಗೆ ಶಲ್ಯ ಚಿಕಿತ್ಸೆಯ ಪೂರ್ವ ಮದಿರಾಪಾನ ಮಾಡಿಸಬೇಕೆಂಬುದು ಅದು ಎನ್ಸೈಸಿಯಾ ಪರಿಣಾಮವ,
ಒಂದು ಬಾರಿ ಒಬ್ಬ ಅಪರಿಚಿತನು ದುರ್ಘಟನೆಯಲ್ಲಿ ಮೂಗು ಒಡೆದು ಕೊಂಡು ಸುಶ್ರುತರಲ್ಲಿಗೆ ಬಂದನು. ಸುಶ್ರುತರು ಅವನ ಬಾಯಿಯನ್ನು ಔಷಧದ ನೀರಿನಿಂದ ತೊಳೆದರು. ತಮ್ಮ ಉಪಕರಣಗಳನ್ನು ಕಾಸಿದರು. ನಂತರ ಅವನ ಗಲ್ಲದಿಂದ ತುಸು ಮಾಂಸವನ್ನು ಕೊಯ್ದು ತೆಗೆದು ಅವನ ಮೂಗಿನ ಮೇಲೆ ಔಷಧದಿಂದ ಹಚ್ಚಿ ಆಕಾರ ಮಾಡಿದರು. ಮೂಗಿನ ಮೇಲೆ ದಾರಾಅರಿಷಿಣದ ರಸ ಹಚ್ಚಿ ಅದನ್ನು ಅರಳೆ ಯಿಂದ ಮುಚ್ಚಿ ಕಟ್ಟಿದರು. ನಂತರ ಅವನಿಗೆ ಔಷಧಗಳ ಸೂಜಿಪಟ್ಟ ನೀಡಿದರು. ಅದನ್ನು ಪ್ರತಿನಿತ್ಯ ಸೇವಿಸಬೇಕೆಂದು ಸಲಹೆ ನೀಡಿದರು.
ಈ ಪ್ರಕಾರ ಸುಶ್ರುತರು ಪೂರ್ವದಲ್ಲಿ ಅವರು ಏನೆಲ್ಲ ಮಾಡಿದರೋ ಅವೆಲ್ಲವೂ ಇಂದಿನ ಯುಗದಲ್ಲಿ ಪ್ಲಾಸ್ಟಿಕ್ ಸರ್ಜರಿಯ ಎನ್ನುವ ಹೆಸರಿನಲ್ಲಿ ಪ್ರಚಲಿತಕ್ಕೆ 67
ಬಂದಿದೆ. ಸುಶ್ರುತರು ಶಲ್ಯ ಚಿಕಿತ್ಸೆಯಲ್ಲಿ ಅದ್ಭುತ ಕೌಶಲ್ಯವನ್ನು ಪಡೆದಿದ್ದರು. ಅವರು ಮುಂದೆ ಎಲುವು ಜೋಡಿಸುವುದರಲ್ಲಿ ಹಾಗೂ ಮೋತಿಬಿಂದು ಚಿಕಿತ್ಸೆಯಲ್ಲಿ ವಿಶೇಷ ಪರಿಣಿತರಿದ್ದರು. ಮನುಷ್ಯನ ಶರೀರದಲ್ಲಿ ಇರುವ ಕೀಯೆಗಳ ವರ್ಗಿಕರಣ ರಕ್ತ ಹೀರುವ ಜಿಗಳಿ ಹಾಗೂ ಪಶುಗಳ ಒಂದು ಅಸ್ಪಷ್ಟ ವರ್ಗಿಕರಣವನ್ನು ಸುಶ್ರುತ ಮಾಡಿದ್ದರು.
ಸುತ್ತುತರು ಬೇರೆ ಬೇರೆ ಋತುಗಳು ಹಾಗೂ ಅವುಗಳ ಮುಖದಿಂದ ಮನುಷ್ಯರು, ಜಯಗಳು ಮತ್ತು ವನಸ್ಪತಿಗಳ ಮೇಲೆ ಆಗುವ ಪ್ರಭಾವದ ಮೇಲೆ ವೈಜ್ಞಾನಿಕ ವಿಚಾರವನ್ನು ತಿಳಿಸಿದರು.
ಸುಶ್ರುತದಿಂದ ಬರೆದ ಪುಸ್ತಕ 'ಸುಶ್ರುತ ಶಲ್ಯ ತಂತ್ರ' ಅಥವಾ ಸುಶ್ರುತ ಸಂಹಿತಾ ಅತ್ಯಧಿಕ ಮಹತ್ವದ್ದೆಂದು ಮನ್ನಿಸಲಾಗುತ್ತದೆ, ಅವರು ಈ ಸಂಹಿತೆಯಲ್ಲಿ ಸೀಳಿ ಕೊಯ್ಯುವ ಪದ್ಧತಿ ಹಾಗೂ ಬೇರೆ ಬೇರೆ ಉಪಕರಣಗಳ ವಿಷಯವನ್ನು ಬರೆದಿದ್ದಾರೆ. ಅವರು ತಮ್ಮ ಉಪಕರಣಗಳ ಹೆಸರುಗಳನ್ನು ಪಕ್ಷಿಗಳ ಹಾಗೂ ಪಶುಗಳ ಹೆಸರಿನಲ್ಲಿ ಇಟ್ಟು ಆ ಮುಖದಿಂದ ತಮ್ಮ ಉಪಕರಣವನ್ನು ತಿಳಿದುಕೊಳ್ಳುತ್ತಿದ್ದರು. ಅವುಗಳಲ್ಲಿ ಕೆಲವು ಹೆಸರುಗಳು ಇಂದಿಗೂ ಪ್ರಸಿದ್ಧವಾಗಿವೆ.
ಸುಶ್ರುತ ಸಂಹಿತಾ ಸಂಸ್ಕೃತ ಭಾಷೆಯಲ್ಲಿದೆ. ಇದರ 120 ಅಧ್ಯಾಯಗಳಲ್ಲಿ ಶಲ್ಯ ಚಿಕಿತ್ಸಾ ಹಾಗೂ ಅನ್ಯ ಅಧ್ಯಾಯಗಳಲ್ಲಿ ಶರೀರ ಚಿಕಿತ್ಸೆಯ ಬಗೆಗೆ ಬರೆಯಲಾಗಿದೆ. ಇದಲ್ಲದೆ ಸುಶ್ರುತ ಸಂಹಿತೆಯಲ್ಲಿ ಆಯುರ್ವೇದದ ಬೇರೆ ಬೇರೆ ಪರೀಕ್ಷೆ, ನೇತ್ರ ತಲೆನೋವು ಹಾಗೂ ಪ್ಲಾಸ್ಟಿಕ್ ಸರ್ಜರಿ ಮೊದಲಾದ ವಿಷಯಗಳ ಬಗೆಗೂ ತಿಳುವಳಿಕೆ ನೀಡಲಾಗಿದೆ.
ಎಂಟನೇ ಶತಾಬಿಯಲ್ಲಿ ಸುರುತ ಸಂಹಿತಾ ಅರಬ್ಬಿ ಭಾಷೆಯಲ್ಲಿ ಅನುವಾದ ವಾಯಿತು. ಅನುವಾದಿತ ಪುಸ್ತಕಗಳ ಹೆಸರುಗಳು - ಕಿತಾಬಶ ಶೂನ ಎ ಹಿಂದಿ ಮತ್ತು ಕಿಶಾಚಿ ಸುಸುರದು.
ತಮ್ಮ ಪುಸ್ತಕದಲ್ಲಿ ಸುತ್ತುತರು - ಮಾನವ ಶರೀರದ ಪೂರ್ಣಜ್ಞಾನ ಪಡೆಯಲು ಶವ ಪರೀಕ್ಷಣ ಅಥವಾ ಶವವನ್ನು ಕೊಯ್ಯುವದು, ಸೀಳುವದು ಅತೀ ಅವಶ್ಯಕವೆಂದು ಹೇಳಿದ್ದಾರೆ.
ಸುಶ್ರುತರು -ಒಬ್ಬ ಸಫಲ ಚಿಕಿತ್ಸಕನಿಗಾಗಿ ಪುಸ್ತಕದ ಜ್ಞಾನವಲ್ಲದೆ ಪ್ರಯೋಗಾತ್ಮಕ ಹಾಗೂ ವ್ಯವಹಾರಿಕ ಅಭ್ಯಾಸವೂ ಅವಶ್ಯಕವೆಂದಿದ್ದಾರ.
ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ
ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು
2.ಚರಕ
ಆಯುರ್ವೇದ ಚಿಕಿತ್ಸಾ ಶಾಸ್ತ್ರದಲ್ಲಿ ಚರಕನ ಹೆಸರು ವಿಶ್ವ ಪ್ರಸಿದ್ಧವಿದೆ. 'ಚರಕ'ದ ಅರ್ಥ 'ನಡೆಯುವದು', ಚರಕ ದೂರ ದೂರದವರೆಗೆ ಪ್ರವಾಸ ಮಾ ಜನರಿಗೆ ಶಿಕ್ಷಣ ಕೊಡುತ್ತಿದ್ದರು. ಅಂತೆಯೇ ಅವರ ಹೆಸರು ಚರಕ ಎಂದಾಯಿತು.
ಚರಕರಿಂದ ಬರೆದ 'ಚರಕ ಸಂಹಿತಾ'' ಆಯುರ್ವೇದದ ಎಲ್ಲಕ್ಕೂ ಪ್ರಾಚೀನ ಹಾಗೂ ಪ್ರಮಾಣಿತ ಆರ್ಷ ಗ್ರಂಥದಲ್ಲಿ ಒಂದಾಗಿದೆ. ಇಂದು ಉಪಲಬ್ಬ ವಿರುವ ಆಯುರ್ವೇದ ಸಂಹಿತೆಗಳಲ್ಲಿ ಚರಕ ಸಂಹಿತಾ ಸರ್ವಶ್ರೇಷ್ಠ ಗ್ರಂಥವಾಗಿದೆ. ಇದರಲ್ಲಿ ಚಿಕಿತ್ಸಾ ವಿಜ್ಞಾನದ ಮೌಲಿಕ ತತ್ವಗಳ ಅತ್ಯಂತ ಉತ್ತಮ ವಿವೇಚನವಿದೆ. ಅಂತೆಯೇ ಪ್ರಾಚೀನ ವಿದ್ವಾಂಸರು 'ಚರಕನ್ನು ಚಿಕಿತ್ಸತೇ' ಎಂದಿದ್ದಾರೆ. ಚರಕ ಸಂಹಿತೆಯಲ್ಲಿ ರೋಗಗಳ ಲಕ್ಷಣಗಳು ಹಾಗೂ ಅವುಗಳ ಚಿಕಿತ್ಸೆಯ ವರ್ಣನೆಯಿದೆ. ತನ್ನ ಗ್ರಂಥದಲ್ಲಿ ಚರಕನು ಆಯುರ್ವೇದವನ್ನು 8 ಖಂಡಗಳಲ್ಲಿ ವರ್ಗಿಕರಿಸಿದ್ದಾನೆ
ಪ್ರಥಮ ಖಂಡ - ಸೂತ್ರ ಸ್ಥಾನದಲ್ಲಿ ಔಷಧ ವಿಜ್ಞಾನ, ಆಹಾರ, ಶಾರೀರಿಕ ಮಾನಸಿಕ ರೋಗಿಗಳ ಚಿಕಿತ್ಸೆಯನ್ನು ಉಲ್ಲೇಖಿಸಿದ್ದಾನೆ.
ದ್ವಿತೀಯ ಖಂಡ - 'ನಿದಾನ ಸಾನ' ದಲ್ಲಿ ಪ್ರಮುಖ ರೋಗಗಳ ಕಾರನ್ನು ವರ್ಣಿಸಿದ್ದಾನೆ.
ತೃತೀಯ ಖಂಡ -'ವಿಧಾನ ಸ್ಥಾನದಲ್ಲಿ ಶಾರೀರಿಕ ಶರೀರವರ್ಧಕ ಊಟದ ಬಗ್ಗೆ ಬರೆದಿದ್ದಾನೆ.
ಚತುರ್ಥ ಖಂಡ- 'ಶರೀರಸ್ಥಾನದಲ್ಲಿ ಶಾರೀರಿಕ ರಚನೆಯನ್ನು ವರ್ಣಿಸಿದ್ದಾನೆ. ಪಂಚಮ ಬಂಡ- ಇಂದ್ರಿಯ ಸ್ಥಾನದಲ್ಲಿ ರೋಗಗಳ ಚಿಕಿತ್ಸೆಯನ್ನು ವರ್ಣಿಸಿದ್ದಾನೆ.
ಆರನೇ ಖಂಡ - "ಚಿಕಿತ್ಸಾ ಸ್ಥಾನ" ದಲ್ಲಿ ಕೆಲ ವಿಶೇಷ ರೋಗಿಗಳ ಚಿಕಿತ್ಸಾ ಪದ್ಧತಿಯನ್ನು ವರ್ಣಿಸಿದ್ದಾನೆ.
ಏಳನೆಯ ಖಂಡ - 'ಕಲಸ್ಥಾನ' ದಲ್ಲಿ ವಿಶೇಷ ಉಪಚಾರಗಳ ವರ್ಣನೆ ಇದೆ. ಎಂಟನೆಯ ಖಂಡ . 'ಸಿದ್ಧಿಸ್ಥಾನ' ದಲ್ಲಿ ವಿಶೇಷ ಉಪಚಾರಗಳನ್ನು ವರ್ಣಿಸಿದ್ದಾನೆ.
ಚಿಕಿತ್ಸಕನಿಗೆ ಸರ್ವ ಪ್ರಥಮ ರೋಗಗಳ ಕಾರಣಗಳ ಶೋಧ ಮಾಡುವ ದಾಗಿದೆ ಎಂದು ಚರಕ ಹೇಳುತ್ತಾನೆ. ನಂತರವೇ ಅದರ ಉಪಚಾರ ಮಾಡುವದು.
ಚರಕನು ಪಾಚನ, ಉಪಾಪಚಯ, ಶರೀರ ಪ್ರತಿರಕ್ಷಾ ಮೊದಲಾದ ವಿಷಯಗಳ ತಿಳಿವಳಿಕೆಯುಳ್ಳ ಪ್ರಥಮ ಚಿಕಿತ್ಸಕನಾಗಿದ್ದನು.
ಒತ್ತ, ಕಫಗಳ ರಕ್ತ ಮಾರಿಸ ಮತ್ತು ಮಜ್ಞಾ, ಧಾತುಗಳು ಉಂಡ ಭೋಜನದ ಮೇಲೆ ಪ್ರತಿಕ್ರಿಯೆ ತೋರಿಸುವವೆಂಬುದು ಚರಕನ ಅಭಿಪ್ರಾಯ. ಮಾನವ ಶರೀರದಲ್ಲಿ ಇದ್ದ ದೋಷಗಳು ಅಸಂತುಲಿತವಾದರೆ ಆಗಲೇ ರೋಗಗಳ ಉತ್ಪತ್ತಿಯಾಗುತ್ತದೆ. ಈ ಸಂತುಲತೆಯನ್ನು ಸ್ಥಿರಗೊಳಿಸಲು ಅವನು ಕೆಲ ಔಷಧಗಳನ್ನು ಕೊಡುತ್ತಿದ್ದನು.
ಮನುಷ್ಯನ ಶರೀರದ ರಚನೆ ಹಾಗೂ ವಿಭಿನ್ನ ಅಂಗಗಳ ರಚನೆಯ ಬಗೆಗೂ ಚರಕನು ಅಭ್ಯಾಸ ಮಾಡಿದನು.
ಚರಕನು ಹೃದಯವನ್ನು ಶರೀರದ ನಿಯಂತ್ರಣ ಕೇಂದ್ರವೆಂದು ತೋರಿಸಿದನು. ಅದು ಇಡೀ ಶರೀರದ ವಿಭಿನ್ನ ಧಮನಿಗಳೊಂದಿಗೆ ಸಂಪರ್ಕಿಸುವದು. ಈ ಧಮನಿಗಳು ರಕ್ತನಾಳಗಳಿಗೆ ಆಹಾರ ಪೂರೈಸುತ್ತವೆ. ವ್ಯರ್ಥ ಪದಾರ್ಥಗಳನ್ನು ಹೊರಗೆ ಒಯ್ಯುತ್ತದೆ. ಯಾವದೇ ಮುಖ್ಯ ನಲ್ಲಿಯಲ್ಲಿ ಉತ್ಪನ್ನ ಅವರೋಧದಿಂದ ಆ ಅಂಗದಲ್ಲಿ ವಿಕಾರ ಉಂಟಾಗುತ್ತದೆ. ಚರಕನ ಎಲ್ಲ ಚಿಕಿತ್ಸಾ ವಿಜ್ಞಾನದ ಒಂದು ಮಹತ್ವಪೂರ್ಣ ಭಾಗವಿದೆ. ಅಂತಯೇ ಆಯುರ್ವೇದದ ಆರ್ಷಗ್ರಂಥ ಇಂದಿಗೂ ಅಷ್ಟೇ ಪ್ರಮಾಣಿತ ವಿದೆ. ಅದು ಪ್ರಾಚೀನ ಕಾಲದಲ್ಲಿದ್ದಷ್ಟು ನಮ್ಮ ಆಯುರ್ವೇದಗಳ ಮಾನ್ಯತೆಗಳು, ಸಿದ್ದಾಂತಗಳು, ಹಾಗೂ ಇದರಲ್ಲಿ ವರ್ಣಿತ ಅನೇಕ ಔಷಧಿ ಗುಣಗಳು ಇಂದಿಗೂ ಆಯುರ್ವಿಜ್ಞಾನವೂ ಸ್ವೀಕಾರ ಮಾಡುತ್ತದೆ. ಆಯುರ್ವೇದಿಕ ಔಷಧಿಗಳ ಮೇಲೆ ವಿದೇಶಗಳಲ್ಲಿ ಅನೇಕ ಸಂಶೋಧನೆಗಳಾಗತೊಡಗಿವೆ.
ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 3 ನೇ ದಿನ
ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು
3. ನಾಗಾರ್ಜುನ
ನಾಗಾರ್ಜುನರು ಪ್ರಾಚೀನ ಭಾರತದ ರಸಾಯನ ಶಾಸ್ತ್ರದ ಒಬ್ಬ ಪ್ರಖ್ಯಾತ ದ್ವಾಂಸರು. ಅವರ ಜನನ ಸೋಮನಾಥದ ನಿಕಟ ಗುಜರಾತದಲ್ಲಿ ದೈಹಿಕ ಹೆಸರಿನ ಹಿತ್ತಿಯಲ್ಲಾಯಿತು. ಆಗ ಸುಮಾರು ೭-೮ನೇ ಶತಮಾನವಿರಬಹುದೆಂದು ತಿಳಿಯ ಲಾಗುತ್ತದೆ. ಇದೇ ಸಮಯ ಆಯುರ್ವೆದ ಧಾತುವಾದದ್ದಿದೆ.
ನಾಗಾರ್ಜುನರು ಒಬ್ಬ ರಸಾಯನ ಅರ್ಥಾತ್ ಕಿಮಿಯಾಗರ. ನಾಗಾರ್ಜುನರು ಬರೆದ ಗ್ರಂಥ 'ರಸರತ್ನಾಕರ' ಹಾಗೂ 'ರಸೇಂದ್ರಮಂಗಲ'' -ಶೈಧಿಕ ಪ್ರಸಿದ್ಧವಿದೆ, ರಸರತ್ನಾಕರದಲ್ಲಿ ಧಾತುಗಳ ಸಂಶೋಧನೆ ಹಾಗೂ ಅವುಗಳ ಗುಣ-ದೋಷಗಳ ನಿರೂಪಣೆ ಇದೆ. ಅದರಲ್ಲಿ ಪಾರಜದ ಉಲ್ಲೇಖನವೂ ಇದೆ.
ಪಾರಜದ ಪ್ರಯೋಗವು ಅತ್ಯಂತ ಮಹತ್ವಪೂರ್ಣವುಳ್ಳದ್ದು. ಇದರಲ್ಲಿ ರಾಸಾಯನಿಕ ಕ್ರಿಯೆಗಳು ಇಂದಿಗೂ ಆಶ್ಚರ್ಯವನ್ನುಂಟುಮಾಡುತ್ತವೆ. ಉತ್ಪನ್ನ ಮಾಡುವ ಕೊಡಲಾಗಿದೆ. ಗ್ರಂಥದಲ್ಲಿ ಮತ್ತು ಮಟ್ಟದ ಗ್ರಂಥದಲ್ಲಿ ಬಂಗಾರ, ಬೆಳ್ಳಿ, ಟಿನ್ ಮೊದಲಾದ ಧಾತುಗಳನ್ನು ಶುದ್ಧಗೊಳಿಸುವ ರೀತಿಯ ವರ್ಣನೆಯನ್ನು ಕೊಡಲಾಗಿದೆ.
ಪಾರಜದಿಂದ ಸಂಜೀವಿನಿ ಹಾಗೂ ಅನ್ಯ ಪದಾರ್ಥಗಳನ್ನು ಮಾಡಲು ನಾಗಾರ್ಜುನರು ಪಶುಗಳು, ವನಸ್ಪತಿ ಸತ್ವಗಳು, ಆಮ್ಲ ಹಾಗೂ ಖನಿಜಗಳನ್ನು ಉಪಯೋಗಿಸಿಕೊಂಡರು. ಎಷ್ಟೋ ಧಾತುಗಳನ್ನು ತೊಳೆಯಲು ಅವರು ವನಸ್ಪತಿಗಳಿಂದ ನಿರ್ಮಿತ ತೇಜಾಬದ ಉಪಯೋಗದ ಬಗೆಗೆ ಸೂಚನೆ ನೀಡಿದರು.
ಬಹಳಷ್ಟು ವಿಜ್ಞಾನಿಗಳು ನಾಗಾರ್ಜುನರ ಗ್ರಂಥಗಳಿಂದ ರಸಾಯನ ವಿಜ್ಞಾನದ ವಿಶೇಷ ಜ್ಞಾನ ಪಡೆದರು. ನಾರ್ಗಾಜುನರು ತಮ್ಮ ಪುಸ್ತಕದಲ್ಲಿ ಎಷ್ಟೋ ಮಹತ್ವಪೂರ್ಣ ರಸಾಯನಿಕ ಪ್ರಕ್ರಿಯೆಗಳ ವರ್ಣನೆಯನ್ನು ಮಾಡಿದ್ದಾರೆ. ಆಸವನ (ಡಿಸ್ಟಿಲೇಶನ್) (ಸಬ್ಲಿಮೇಶನ್) ದ್ರವಣ (ಲಿಷೇಫಿಕೇಶನ್) ಎಲ್ಲ ಪ್ರತಿಕ್ರಿಯೆಗಳು ಇಂದು ರಸಾಯನ ವಿಜ್ಞಾನದಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿವೆ. ಎಷ್ಟೋ ಧಾತು ಗಳಿಂದ ಬಂಗಾರ ಅಥವಾ ಬಂಗಾರದಂತೆ ಹಳದಿ ವರ್ಣತೋರುವ ಧಾತುಗಳನ್ನು ಮಾಡುವ ವಿಧಿಗಳ ವರ್ಣನೆಯನ್ನು ನಾಗಾರ್ಜುನರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಎಲ್ಲ ಸಂಗತಿಗಳಿಂದ ನಾಗಾರ್ಜುನರಿಗೆ ವಿಭಿನ್ನ ವಸ್ತುಗಳ ರಸಾಯನಿಕ ಗುಣ ಹಾಗೂ ಮಹತ್ವದ ಅದ್ಭುತ ಜ್ಞಾನವಿದ್ದಿತೆಂದು ತಿಳಿದು ಬರುತ್ತದೆ.
ಒಂದು ಕಿಮಿಯಾಗರಿ (ರಸಾಯನಣ್ಣ)ಯಿಂದಲೇ ಆಧುನಿಕ ರಸಾಯನ ವಿಜ್ಞಾನದ ಜನ್ಮವಾಯಿತು. ಇದರಿಂದಾಗಿ ಭಾರತದಲ್ಲಿ ನಾಗಾರ್ಜುನರನ್ನು ಧಾತುವಾದದ ಪ್ರವರ್ತಕರೆಂದು ತಿಳಿಯಲಾಗುತ್ತದೆ. ನಾಗಾರ್ಜುನರು ಪಾರಜದ ಭಸ್ಮವನ್ನು ತಯಾರ ಮಾಡುವ ವಿಧಿಯನ್ನು ವರ್ಣಿಸಿದ್ದಾರೆ ವಿಧಿಯಿಂದ ಪ್ರಯೋಗದಿಂದ ಶರೀರವು ದೀರ್ಘಕಾಲದವರೆಗೆ ನಿರೋಗವಾಗಿರುತ್ತದೆ.
ನಾಗಾರ್ಜುನರು 'ಸುಶ್ರುತ ಸಂಹಿತಾ' ಎಂಬ ಪುಸ್ತಕವನ್ನು ಸಂಪಾದನೆ ಮಾಡಿದರು. ಹಾಗೂ 'ಸುಶ್ರುತ ಸಂಹಿತೆ' ಯಲ್ಲಿ ಉತ್ತರ ತಂತ್ರ ಹೆಸರಿನ ಹೊಸ ಅಧ್ಯಾಯವನ್ನು ಜೋಡಿಸಿದರು.ಇದರಲ್ಲಿ ಔಷಧಿಗಳನ್ನು ತಯಾರಿಸುವ ವಿಧಿಯನ್ನು ಹೇಳಲಾಗಿದೆ.
ನಾಗಾರ್ಜುನರು ಆಯುರ್ವೆದ "ಆರೋಗ್ಯ ಮಂಜರಿ ಯೋಗಸಾರ" , ಯೋಗಾಷ್ಟಕ ಮುಂತಾದ ಗ್ರಂಥಗಳನ್ನು ರಚಿಸಿದರು. ಒಬ್ಬ ಅನುಭವೀ ರಸಾಯನ ಶಾಸ್ತಿಯಾದ ಕಾರಣ ಎಷ್ಟೋ ವಿಜ್ಞಾನಿಗಳು ತಮ್ಮ ಶೋಧಗಳಲ್ಲಿ ಅವರ ಜ್ಞಾನದ ಸಹಾಯ ಪಡೆದರು. ಕಿಮಿಯಾಗರಿ-ಪ್ರಾಚೀನ ಕಾಲದಲ್ಲಿ ರಸಾಯನಕ್ಕೆ ಕಿವಿಯಾಗಲಿ ಎಂದೇ ಎನ್ನುತ್ತಿದ್ದರು. ಕಿಮಿಯಾಗರಿಯು ಎಷ್ಟೋ ಹೊಸ ರಸಾಯನಗಳನ್ನು ಶೋಧಿಸಿತು. ಅವರು ಔಷಧ ವಿಜ್ಞಾನದಲ್ಲೂ ಎಷ್ಟೋ ಶೋಧ ಮಾಡಿದರು. ಅವರ ಮಹತ್ವಪೂರ್ಣ ಸಾಧನೆ ಯೆಂದರೆ ಅಮೃತ ಹಾಗೂ ಸಂಜೀವಿನಿ ಪುಡಿಯನ್ನು ತಯಾರಿಸುವದು, ಅದರಿಂದ ಎಲ್ಲ ರೋಗಗಳನ್ನು ದೂರ ಮಾಡುವುದಾಗಿತ್ತು ಹಾಗೂ ಮರಣವನ್ನು ಗೆಲ್ಲವುದಾಗಿತ್ತು.
ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 3 ನೇ ದಿನ
ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು
5.ಧನ್ವಂತರಿ
ಧನ್ವಂತರೀ ದೇವತೆಗಳ ವೈದ್ಯ ಹಾಗೂ ಆಯುರ್ವೇದ ಶಾಸ್ತ್ರದ ಪ್ರವರ್ತಕ, ದೇವತೆಯು ಪುರಾಣಗಳಲ್ಲಿ ಅವರ ಔಷಧ ಜ್ಞಾನದ ಪ್ರಶಂಸೆ ಮಾಡಲಾಗಿದೆ. ಪೌರಾಣಿಕ ವ್ಯಾಖ್ಯಾನದ ಅನುಸಾರ ಅವರ ಉತ್ಪತ್ತಿಯು ಸಮುದ್ರ ಮಂಥನದ ಸಮಯ ಹೊರಟ 14 ರತ್ನಗಳಲ್ಲಿ ಒಂದಾದ, ಸಮುದ್ರದಿಂದ ಪ್ರಕಟವಾಗುವ ಕಾಲಕ್ಕೆ ಧನ್ವಂತರಿಯ ಕೈಯಲ್ಲಿ ಅಮೃತ ಕುಂಭವಿದ್ದಿತು.
ಧನ್ವಂತರಿಯ ಬಗೆಗೆ ತಿಳಿದ ಪ್ರಕಾರ ಅವರು ದೇವರಾಜ ಇಂದ್ರ ಅಥವಾ | ಭಾರದ್ವಾಜ ಋಷಿಗಳಿಂದ ಆಯುರ್ವೇದದ ಜ್ಞಾನ ಸಂಪಾದಿಸಿದ್ದರು. ಪ್ರತಿವರ್ಷ ದೀಪಾವಳಿಯ ಎರಡು ದಿನಗಳ ಮೊದಲು ಕಾರ್ತಿಕ ಮಾಸದ ತ್ರಯೋದಶಿಯ ದಿನ ಅವರ ಸ್ಮರಣೆಗೆ ಧನ್ವಂತರಿ ದಿವಸವನ್ನು ಒಳ್ಳೆ ವೈಭವದಿಂದ ಆಚರಿಸಲಾಗುವದು. ಸುಶ್ರುತ ಸಂಹಿತೆಯಲ್ಲಿ ಕಾಶೀಪತಿ ದಿವೋದಾಸ ಹಾಗೂ ಧನ್ವಂತರಿ ಹೆಸರು ಬರುತ್ತದೆ , ಆಯುರ್ವೆದ ವಿಜ್ಞಾನಿಯಾದ ಕಾರಣ ಅವರನ್ನು ಧನ್ವಂತರೀ ದಿವೋದಾಸ ಎಂದು ಕರೆಯಲಾಗುವದು. ಅವರು ಸುಶ್ರುತರಿಗೆ ಆಯುರ್ವೇದದ ಉಪದೇಶ ನೀಡಿದರು.
ಧನ್ವಂತರಿಯು ಆಯುರ್ವೇದದ ವಿಷಯದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದರು. ಹಾಗೂ ಅವರ ಪ್ರಚಾರ ಮಾಡಿದರು. ಅಂತೆಯೇ ಅವರನ್ನು ಆಯುರ್ವೇದದ ಪ್ರವರ್ತಕರೆಂದು ತಿಳಿಯಲಾಗುತ್ತದೆ. ಧನ್ವಂತರಿಗೆ ಆರೋಗ್ಯ ಬಂದಿರುವ ಹಾಗೂ ದೀರ್ಘ ಆಯುಷ್ಯ ಪಡೆಯುವ ಜ್ಞಾನವಿದ್ದಿತು. ಹಾಗೆಯೇ ರೋಗ ತಡೆಯುವ, ಉಪಚಾರ ಮಾಡುವ ಜ್ಞಾನವೂ ಇದ್ದಿತು.
ಧನ್ವಂತರಿಯನ್ನು ಕಾಲ್ಪನಿಕ ಈಶ್ವರನೆಂದು ತಿಳಿಯಲಾಗುತ್ತದ. ತಕ್ಕ ಜ್ಞಾನ ಹಾಗೂ ಶಕ್ತಿಯಿಂದ ಅವರು ಸಮಸ್ತ ವಿಶ್ವದ ಸೇವೆ ಮಾಡಿದರು. ಭಾರತೀಯರು ಅವರಿಗೆ ಅತ್ಯಂತ ಉಚ್ಛಸ್ಥಾನ ನೀಡಿದ್ದಾರೆ. ಹಾಗೆಯೇ ಇದೆ ರೂಪದಲ್ಲೇ ಅವರ ಪೂಜೆ ನಡೆದಿದೆ.
ಧನ್ವಂತರೀ ಶಬ್ದದ ಅರ್ಥ ಶಲ್ಯ ಚಿಕಿತ್ಸೆಯಲ್ಲಿ ಪ್ರವೀಣ, ಸುಶ್ರುತ ಸಂಹಿತೆಯ ಪ್ರಕಾರ ಆಯುರ್ವೇದದ ಎಂಟು ಅಂಗಗಳಲ್ಲಿ ಶಲ್ಯವೇ ಶ್ರೇಷ್ಟ ಧನ್ವಂತರಿಯು ಈ ಎಂಟೂ ಅಂಗಗಳ ಜ್ಞಾನಿಯಾಗಿದ್ದರು. ಅವರು ಚಿಕಿತ್ಸಾ ಕ್ಷೇತ್ರದಲ್ಲಿ ಅನೇಕ ಶೋಧ ಮಾಡಿ ಅದರಲ್ಲಿ ಸಫಲರೂ ಆದರು. ಅವರು ಸ್ವಾಸ್ಥ್ಯದಲ್ಲಿ ರಕ್ಷಕ ಹಾಗೂ ಆಯುರ್ವೇದದ ರಸಾಯನಗಳು ಹಾಗೂ ದ್ರವ್ಯಗಳನ್ನು ಶೋಧಿಸಿದರು. ಅವರು ಎಲ್ಲಕ್ಕೂ ಹೆಚ್ಚಿನ ಶೋಧವೆಂದರೆ ಅಮೃತದ ಪ್ರಯೋಗ ಈ ಪ್ರಕಾರ ಧನ್ವಂತರಿಯು ಜೀವಿಯ ಅಂತಿಮ ಕ್ಷಣವಾದ ಮರಣದ ಮೇಲೂ ವಿಜಯ ಸಾಧಿಸಿದರು.
ಕಾಲಾಂತರದಲ್ಲಿ ಧನ್ವಂತರಿಯ ವೈದ್ಯರೆಂದು ಎಣಿಸಲ್ಪಟ್ಟರು. ಯಾರೇ ಆಗಲಿ ಚಿಕಿತ್ಸೆಯಲ್ಲಿ ನಿಪುಣನಾದರೆ ಅವರಿಗೆ ಧನ್ವಂತರಿಯೆಂದು ಹಾಗೂ ಶಲ್ಯ ಚಿಕಿತ್ಸಕ ಸಂಪ್ರದಾಯ ಅಥವಾ ಶಾಖೆಗೆ ಧನ್ವಂತರಿಯೆಂದು ಕರೆಯಲಾಗುವದು.
ಪರಮಾಣು ಸಿದ್ಧಾಂತವನ್ನು ಕಂಡುಹಿಡಿದದ್ದು ಅಮೇರಿಕಾವೂ ಅಲ್ಲ, ರಶ್ಯಾವೂ ಅಲ್ಲ! ಬದಲಾಗಿ, 2500 ವರ್ಷಗಳ ಹಿಂದಿದ್ದ ನಮ್ಮದೇ ದೇಶದ ಮಹರ್ಷಿ! ಯಾರು ಗೊತ್ತೇ?!
ಪ್ರಭಾಸ್ ಕ್ಷೇತ್ರ, ಅಂದರೆ ಇವತ್ತಿನ ಗುಜರಾತ್ ನಲ್ಲಿ 600 BC ನಲ್ಲಿ ಹುಟ್ಟಿದ ಆಚಾರ್ಯ ಕಣಾದರ ನಿಜ ನಾಮಧೇಯ ಆಚಾರ್ಯ ಕಶ್ಯಪ!
ಕಶ್ಯಪ ಕಣಾದನಾಗಿದ್ದೇ ರೋಚಕ !!
ಅದೊಮ್ಮೆ ಕಶ್ಯಪರು ತನ್ನ ತಂದೆಯ ಜೊತೆ ಪ್ರಯಾಗಕ್ಕೆ ಪ್ರಯಾಣ ಮಾಡುವಾಗ, ಭಕ್ತಾದಿಗಳು ರಸ್ತೆಗಳನ್ನೆಲ್ಲ ಹೂವಿನಿಂದ, ಮತ್ತು ಅಕ್ಕಿ ಕಾಳುಗಳಿಂದ ಹಾಸಿದ್ದರು! ಕಶ್ಯರಿಗೆ ಆ ಚಿಕ್ಕ ಚಿಕ್ಕ ಅಕ್ಕಿ ಕಾಳುಗಳ ಮೇಲೆ ಕುತೂಹಲ ಹುಟ್ಟಿತು! ಎಲ್ಲರೂ, ಭಗವಂತನ ಆರತಿಯಲ್ಲಿ ಮುಳುಗಿದ್ದರೆ, ಕಶ್ಯಪ ಅಕ್ಕಿ ಕಾಳುಗಳನ್ನು ಹೆಕ್ಕುತ್ತ ನಡೆದರು! ನೆರೆದಿದ್ದವರಿಗೆ ಆಶ್ಚರ್ಯ!
ಕಶ್ಯಪರು ನುಡಿಯುತ್ತಾರೆ! ” ಈ ಒಂದು ಅಕ್ಕಿ ಕಾಳು ನಮಗೆ ಬೆಲೆಯಿಲ್ಲವೆನ್ನಿಸಬಹುದು. ಆದರೆ, ನೂರಾರು ಅಕ್ಕಿ ಕಾಳುಗಳು ಒಬ್ಬ ವ್ಯಕ್ತಿಯ ಒಂದು ಹೊತ್ತಿನ ಊಟಕ್ಕಾಗುವಷ್ಟು ಬೆಲೆಬಾಳುತ್ತದೆ! ಅಥವಾ, ಒಂದು ಕುಟುಂಬಕ್ಕಾಗುವಷ್ಟು! ಒಂದು ಇಡೀ ಜಗತ್ತಿಗಾಗುವಷ್ಟು! ಒಂದು ಇಡೀ ಮನುಕುಲಕ್ಕಾಗುವಷ್ಟು ಬೆಲೆಬಾಳುತ್ತದೆ! ಆದ್ದರಿಂದ, ಈ ಒಂದು ಅಕ್ಕಿ ಕಾಳೂ ಸಹ ಜಗತ್ತಿನ ಅತಿ ಬೆಲೆಬಾಳುವಂತಹದ್ದು!”
ಚಕಿತಗೊಂಡ ಭಕ್ತರು ‘ಉಘೇ’ ಎನ್ನುತ್ತಾರೆ! ‘ಕಣಾದ’ ಎಂದು ಕರೆಯಲು ತೊಡಗುತ್ತಾರೆ! ‘ಕಣ’ ಎಂದರೆ ಸಂಸ್ಕೃತದಲ್ಲಿ ‘ಒಂದು ಚಿಕ್ಕ ವಸ್ತು’!
ಅಲ್ಲಿಂದ, ಕಣಾದರು ತಮ್ಮ ಬುದ್ಧಿಗೆ ನಿಲುಕಿದಂತಹದ್ದನ್ನು ಬರೆಯಲು ಪ್ರಾರಂಭಿಸುತ್ತಾರೆ! ಅಧ್ಯಯನಕ್ಕಿಳಿಯುತ್ತಾರೆ.. ಪೃಕೃತಿಯೇ ಗುರುವಾಗಿ ಹೋಗುತ್ತದೆ! ಜೊತೆ ಜೊತೆಗೆ ತನ್ನ ಜ್ಞಾನವನ್ನು ಬೇರೆಯವರಿಗೂ ಅರಿಕೆ ಮಾಡಲು ಪ್ರಾರಂಭಿಸಿದಾಗ, ‘ಆಚಾರ್ಯ (ಅಧ್ಯಾಪಕ)’ ರಾಗಿ, ‘ಆಚಾರ್ಯ ಕಣಾದ’ ನೆನಿಸಿಕೊಳ್ಳುತ್ತಾರೆ!
ಮಹರ್ಷಿ ಕಣಾದ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ